ಗಟ್ಟಿಯಾಗದೇ ಬದುಕು ದಕ್ಕದುನ್ನು
ಕೆರೆ ಬಾವಿಗಳ ಪಾಲು ಆಗದಿರು
ಹಗ್ಗದ ಉರುಳಿಗೆ
ನಿನ್ನ ಕೊರಳ ನೀಡದೇ
ಸುತ್ತಲೂ ಕಟ್ಟಿದ ಉಕ್ಕಿನ ಗೋಡೆ
ಬೆಂಕಿಯ ಜ್ವಾಲೆಗೆ ದೂಡುವ
ಕೈಗಳನ್ನು ಕತ್ತರಿಸಲು
ಝಳಪಿಸುವ ಖಡ್ಗವಾಗು.
ಶತ್ರುಗಳ ಸೆಣಸಿ ನಿಲ್ಲಲು
ಆತ್ಮವಿಶ್ವಾಸದ ಆಯುಧವಾಗು,
ಏನಾದರೂ ಆಗು ಕೊನೆಗೆ
ದಹಿಸುವ ಜ್ವಾಲೆಗಳ ನಂದಿಸಲು
ಸ್ವಾತಿಯ ಮುತ್ತಿನ ಮಳೆಯಾಗು,
ಅನಂತ ಜೀವನದ ವ್ಯಥೆಗಳು
ಅಮೂಲ್ಯ ಬದುಕು ಚಿವುಟಿ
ನಿರರ್ಥಕ ನಿಟ್ಟುಸಿರಾಗದೇ
ಸಮೃದ್ಧ ನೆಲದಲ್ಲಿ
ಹಸಿರುಟ್ಟು ಬೇರು ಬಿಟ್ಟು
ಅಸ್ತಿತ್ವಕ್ಕೆ ಅರ್ಥ ನೀಡುವ
ಕಂಪ ಸೂಸುವ
ಸಂಪಿಗೆ ಮರವಾಗು,
ಬಿದ್ದ ಮಳೆಗೆ ನೆಲದ ಹಸಿಗೆ
ಧರೆಯ ಎದೆಯಲಿ ರೋಮಾಂಚನ
ಎದೆಯಲಿ ಧವನ ಚಿಗಿತು
ಮೈಮನಗಳಲ್ಲಿ ಮಿಂಚಿನ ಸಂಚಾರ
ಹೊಳೆವ ಕಾಂತಿಯ ಕಣ್ಣುಗಳಲಿ
ಆತ್ಮವಿಶ್ವಾಸದ ದೃಢ ನಿರ್ಧಾರ
ಉಕ್ಕಿ ಹರಿದಿದೆ ಜೀವಜಲ.
ಧಮನಿಗಳಲಿ ನಿರಂತರ
ಬಿಗಿದಿರುವ ನರನಾಡಿಗಳಿಗೆ
ಸ್ನೇಹದ ತಂಪು ಸಿಂಚನ
ಬದುಕಿನ ಹುಡುಕಾಟ,
ಅದೇ ಕ್ಷಣ ಮತ್ತೇ ಮತ್ತೇ
ಬದುಕು ಒಳಹೊರಗು ಹುಡುಕುತ್ತ
ಗಡಿರೇಖೆಗಳ ಮೆಟ್ಟಿ ನಿಂತು
ಬದುಕುವ ಬದುಕಿಸುವ ಪ್ರಯತ್ನ
ಆಗಲಿ ಇದುವೇ ಮುಕ್ತಿ ಮಂತ್ರ
*****
Related Post
ಸಣ್ಣ ಕತೆ
-
ಗ್ರಹಕಥಾ
[ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…
-
ಸ್ವಯಂಪ್ರಕಾಶ
ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…
-
ಅಂತರಂಗ ಶುದ್ಧಿ ಬಹಿರಂಗ ಶುದ್ಧಿ
ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…
-
ಬೆಟ್ಟಿ
ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…
-
ಗೋಪಿ
ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…